ಮನದಲ್ಲಿ ಬುಗಿದೆದ್ದ ನೋವಿನ ನೆರಳಿಗೆ
ಮನವದುವು ಮುದುಡಿ ಮಮ್ಮಲು ಮರುಗಿದೆ
ಕಾಣಿಸುತಿಹುದೇ ಬರಿ ಕತ್ತಲು ಕಣ್ಣೆದುರಿಗೆ
ಅದ ಭ್ರಮಿಸಿ ಹೃದಯವು ಮೆದುವಾಗಿ ಕಂಪಿಸಿದೆ
ಬಿಟ್ಟು ಹೋದವೇಕೆ ನಾನಂದು ಕಂಡಿದ್ದ ಕನಸುಗಳು
ಕಣ್ಣೇರು ಸುರಿಸುತಿದೆ ಮನ ಕೊರಗಿ ಕೊರಗಿ
ಸಾಲದಾಯಿತೆ ನನ್ನೆಲ್ಲ ಪ್ರಯತ್ನಗಳು
ಅಡಗಿ ಕುಂತವೆ ಭಾವನೆಗಳು ಲೋಕಕ್ಕೆ ಹೆದರಿ
ಕೂಗಿ ಕರೆಯುತಿಹೆನು ಕನಸುಗಳ ಪುನಃ ನನ್ನೆಡೆಗೆ
ಅರಳಿಸಬೇಕಾಗಿದೆ ದುಗುಡ ತುಂಬಿದ ಮನವ
ಮತ್ತದೇ ಕನಸುಗಳು ಗಾಳಿಯಲಿ ತೇಲುತಿರೆ
ಬಿಡಲಾರೆ ನಿಮ್ಮನ್ನು ಜೀವನಕೆ ಅರ್ಥವನು ಕೊಡುವವರ
ಚೆನ್ನಾಗಿದೆ ಕವನ.
ಪ್ರತ್ಯುತ್ತರಅಳಿಸಿಬುಗಿದೆದ್ದ, ಮಮ್ಮಲ ಪದಗಳು ಸರಿ ಇಲ್ಲವೆಂದು ಕಾಣುತ್ತದೆ. ಗಮನಿಸಿ.