ಬುಧವಾರ, ಜುಲೈ 3, 2013

ಮನಸಲ್ಲಿ ಮೂಡಿದ ಕಾಲ್ಪನಿಕ ರೇಖೆಗಳು



ತುಮುಲ 
---------------------------------------------------
ಭಾರವಾಗಿದೆ ಮನಸ್ಸು ದಿಕ್ಕು ದೆಸೆ ಕಾಣದೆ 
ಸಂತಸ ತುಂಬಿದ ಮನಸ್ಸು ಶಾಂತಿಯ ನೆಲೆ ಅರಸಿದೆ
ಆ ಪರಿಯಲಿ ಈ ಪರಿಯಲಿ ಸಂತಾಪ ಬಯಸಿದೆ
ಸರ್ರನೆ ಮನ ಕರಗಿ ಬಿಡಲಿ ಎಂದು ಹಂಬಲಿಸಿದೆ

ಹೊಗೆಯೊಳಗೆ ಜೀವ
----------------------------------------------------
ಎಲ್ಲೆಲ್ಲೂ ಕಂಡಿತು ಹೊಗೆಯ ಛಾಯೆ
ಏಕೇ ಮಾನವ ನಿನಗೆ ಬೇಕು ಸಿಗರೇಟಿನ ಮಾಲೆ
ಮುಚ್ಚಿಕೊಂಡಿತು ದಾರಿಹೋಕನ ಮೂಗಿನ ಹೊಳ್ಳೆ
ಅದ ನೋಡಿ ಕಾಣಲಿಲ್ಲವೇ ಒಂಚಿತ್ತೂ ಅಸಡ್ಡೆಯ ಗೆರೆ

ಬಾಳ-ಗಾಡಿ
----------------------------------------------------
ರಭಸದಿ ಬೀಸುತಿದೆ ಗಾಳಿ
ಎಲ್ಲಿಂದೆಲ್ಲಿಗೋ ಓಲಾಡುತಿದೆ ಬಾಳ ಗಾಡಿ
ಸವಾರನಲ್ಲವೇ ನಾನು ಬದುಕಾ ಜಟಕಾಬಂಡಿಯಲಿ
ಸಾಗಬೇಕಾಗಿದೆ ದಾರಿ ಮನಸ ತುಮುಲದಲಿ

( ತುಮುಲ ಶಬ್ದದ ಬಳಕೆ -ನಿನ್ನೆ ಓದಿ ಮುಗಿಸಿದ "ತುಮುಲ" ಎಂಬ ಸುಧಾ ಮೂರ್ತಿ ರಚಿತ ಕಾದಂಬರಿಯ ಹೆಸರಿನಿಂದ ಪ್ರೇರಿತ )