ಶುಕ್ರವಾರ, ಮೇ 17, 2013

ಇದುವೆಯೇ ಬಾಳ ಗುಟ್ಟು ?

ಕಳೆದು ಹೋದ ಸಂತಸ ನಾನಿಂದು 
ಕಂಡೆ ನಿನ್ನ ನಗುವ ಕಂಡು 
ಬರಸೆಳೆದ ಭಾವದಲ್ಲಿ ಮಿಂದು 
ಬಾಳ ಸವಿಯ ಉಂಡು

ಇರಬೇಕು ಹಾಲು ಜೇನಿನಂತೆ ಎಂದು 
ಅಪ್ಪ ಅಮ್ಮರ ಜೀವನ ಕಂಡು 
ಜಗಳ ಮನಸ್ತಾಪ ಮಾಮುಲೆಂದು 
ಪ್ರೀತಿ ವಿಶ್ವಾಸ ಕೊನೆತನಕದ ಬಂಧುಗಳು ಎರಡು

ಆ ಹತ್ತು ದಿನಗಳು

ಆ ದಿನ ಸೋಮವಾರ. ಸಂಜೆ ಎಂದಿನಂತೆ ಆಫೀಸ್ ಮುಗಿಸಿ ಮನೆಗೆ ಬಂದು ಅಮ್ಮ ಕಳುಹಿಸಿಕೊಟ್ಟ  ಹಲಸಿನಕಾಯಿ ಚಿಪ್ಸ್ ತಿನ್ನುತ್ತಾ , ತುಂಬಾ ಸಮಯದ ಬಳಿಕ ಬಂಧು ಬಾಂಧವರಿಗೆ  ಫೋನಾಯಿಸಿ  ಸಮಯ ಕಳೆಯುತ್ತಿದ್ದೆ. ಬಹು ವರ್ಷದ ನಂತರ ಹಲಸಿನಕಾಯಿ ಚಿಪ್ಸ್ ತಿನ್ನುವ ಭಾಗ್ಯ ಗಂಡನಿಗೆ ದೊರೆಯುತ್ತೆ ಅಂತ ಖುಷಿಯಿಂದ ಇದ್ದೆ. ಸ್ವಲ್ಪ ಸಮಯದ ತರುವಾಯ ಪತಿದೇವರ ಆಗಮನ. ಮುಖದಲ್ಲಿ ಯಾವತ್ತಿನ ಉತ್ಸುಕತೆ ಇರಲಿಲ್ಲ. ನಿಮಗೊಂದು ಖುಷಿಯ ವಸ್ತು ವಿಷಯ   ಇದೆ ಎಂದು ಹೇಳಿದರೂ ಯಾವುದೇ ಪ್ರತಿಕ್ರಿಯೆ ಬರದೆ ದಾರಿಯ ಧೂಳು ತೊಳೆದುಕೊಳ್ಳಲು ಹೊರಟರು.. ನಾನು ಅಡುಗೆ ಮನೆ ಹೊಕ್ಕು ರಾತ್ರಿ ಊಟಕ್ಕೆ ಅಣಿ ಮಾಡತೊಡಗಿದೆ.. ನನ್ನ ಕೆಲಸದಲ್ಲಿ ತೊಡಗಿದ್ದೆ.. ಘಂಟೆ ೯ ಆಯಿತು.. ಮನೆಯಲ್ಲಿ  ನೀರವ ಮೌನ. ಏನಾಗಿದೆ ಎಂದು ಹುಡುಕ ಹೊರಟಿದರೆ ಗಂಡ ಸುಮ್ಮನೆ ಚಾದರ  ಹೊದ್ದು  ಮಲಗಿದಾರೆ. ಒಮ್ಮೆ ಎದೆ ಧಸಕ್ಕೆಂದಿತು ..ಯಾವತ್ತೋ ಉತ್ಸಾಹದ ಬುಗ್ಗೆಯಂತಿದ್ದೊರು  ಹೀಗೇಕೆ ಆದರು ಎಂಬ ಬೇಜಾರು. ಮೈ ತುಂಬಾನೆ ಸುಡುತ್ತಿತ್ತು .. ಮಾಮೂಲು ಜ್ವರ ಉಂಡು ಮಲಗಿದರೆ ಸರಿಯಾಗುತ್ತೆ ಅಂತ ಊಟ ಮುಗಿಸಿದೆವು.. 

ಮರುದಿನ ಜ್ವರ ಒಂಚಿತ್ತು ಕಡಿಮೆಯಾಗಲಿಲ್ಲ..ಒಲ್ಲದ ಮನಸ್ಸಿನಿಂದ ಆಫೀಸಿಗೆ ಹೊದೆ.. ಬಳಿಕೆ ಮಧ್ಯಾನದ ವೇಳೆಗೆ  ಜ್ವರದ  ತಪಾಸಣೆಗೆ ಆಸ್ಪತ್ರೆಗೆ ಹೊರಟೆವು.. ಮೈ ತಾಪ ಕ್ಷಣೆ ಕ್ಷಣೆ ಏರುತ್ತಿತ್ತು.. ಗುಳಿಗೆ ಕಡಿಮೆ ಮಾಡುತ್ತದೆ ಎಂದು ಒಂದೆರಡು ಎಮ್ಮೆಗೆ ಕೊಡುವಂತಹ ಗಾತ್ರದ ಗುಳಿಗೆ ಬರೆದುಕೊಟ್ಟರು. ಅದರ ಮರುದಿನ ಮೈ ಮೇಲೆ  ನೀರು ಗುಳ್ಳೆಯ ಗಾತ್ರದ ಕೆಂಪು ಬಣ್ಣದ ಬೊಕ್ಕೆ ಕಾಣಿಸಲಾರಂಭಿಸಿತು. ಡಾಕ್ಟರ ಅದನ್ನು ಚಿಕನ್ ಪಾಕ್ಸ್ ಎಂಧು ಧ್ರಢಿಕರಿಸಿದರು. ಒಮ್ಮೆಲೇ ಮನಸ್ಸು ದುಃಖಿತ ಗೊಂಡಿತು. ಸಿಡುಬು ಎಂದು ಖಚಿತವಾದ ಮರುಕ್ಷಣದಿಂದಲೇ ಪಥ್ಯ ಶುರುವಾಯಿತು.. ಒಂಚಿತ್ತೂ ಉಪ್ಪು ಹುಳಿ ಖಾರವಿಲ್ಲದ ಸಪ್ಪೆ ಊಟ.. ಆಪತ್ತಿನ ಮರದ ಚಕ್ಕೆಯ ಕಷಾಯ.. ಜ್ವರ ಒಂದೆರಡು ದಿನದಲ್ಲಿ ಕಡಿಮೆ ಆಯಿತು.. ಬೋಕ್ಕೆಯ ಸಂಖ್ಯೆ ಜಾಸ್ತಿ ಆಯಿತು.. ಈ ಸಾಂಕ್ರಾಮಿಕ ರೋಗಕ್ಕೆ ಒಮ್ಮೆಯೂ ತುತಾಗದ ನಾನು ಇದಕ್ಕೆ ಕಾರಣವೇನು, ಇದು ಹೇಗೆ ಹರಡುತ್ತೆ ಎಂಬಿತ್ಯಾದಿ ವಿಷಯದ ಕುರಿತು  ಇಂಟರ್ನೆಟ್ ಮೊರೆ ಹೋದೆ. ಚಿಕನ್ ಪಾಕ್ಸ್ ಎಂಬ ಹೆಸರಿಗೆ  ಪುರಾವೆಗಳಿಲ್ಲ. ಆದರೂ    ಬಹಳಷ್ಟು ಜನ ಸಾವನ್ನಪ್ಪಿದ ಸೂಚ್ಯಂಕ ದೊರೆಯುತ್ತವೆ.. ಆದರೆ ಮೆಡಿಕಲ್ ಸೈನ್ಸ್  ಕಾರಣ , ಸಿಡುಬಿಗೆ ಕಾರಣೀಭೂತ ವೈರುಸ್   - ವರಿಸೆಲ್ಲ ಜೊಸ್ಟರ್ನ ಗೆ  ಕಂಡು ಹಿಡಿದಿದ್ದಾರೆ .. ಆದರೂ ಹತ್ತು ದಿನಗಳ ವಿಶ್ರಾಂತಿ ಅವಶ್ಯಕ. ಮನುಷ್ಯನಲ್ಲಿ ಇಮ್ಯೂನ್  ಸಿಸ್ಟಮ್ ಡಾಮಾಜ್ ಆದರೆ, ಈ     ರೋಗಕ್ಕೆ ತುತ್ತಾಗುವ ಸಂಭವ ಜಾಸ್ತಿ. ಒಂದೆರಡು ದಿನದಲ್ಲಿ ಕಡಿಮೆ ಮಾಡುವ ಮದ್ದು ಈ ರೋಗಕ್ಕಿನ್ನು ದೊರಕಿಲ್ಲ ..    ಪಥ್ಯದ ಆಹಾರದ ಜೊತೆ ಡಾಕ್ಟರ ಕೊಟ್ಟ ಔಷಧಿ ಮಾತ್ರ ಸಿಡುಬಿಗೆ ರಾಮಬಾಣ.. ನಂಜಿರುವ  ಯಾವುದೇ ತರಕಾರಿ(ಬದನೆ, ಹಲಸಿನ ಕಾಯಿ , ಬೂದು ಕುಂಬಳಕಾಯಿ ) , ಪದಾರ್ಥ( ಉದ್ದಿನಕಾಳು , ಕಡಲೆಹಿಟ್ಟು , ಪಚ್ಚಬಾಳೆ, ಪುಟಾಣಿ,ಶೇಂಗಾ )  ವ್ಯರ್ಜನೆ ಈ ರೋಗಕ್ಕೆ ಕಟ್ಟುನಿಟ್ಟಿನ ಆಹಾರ ಕ್ರಮದಲ್ಲೊಂದು. ಆ ವೈರಸ್ಸಿನ  ಪ್ರಭಾವ   ಕನಿಷ್ಟ ಹತ್ತು ದಿನ  ಬೊಕ್ಕೆ ಒಣಗುತ್ತ ಬಂದ  ಮೇಲೆ ಜನ ಸಂಪರ್ಕಕ್ಕೆ ಅಡ್ಡಿ ಇಲ್ಲ. ಆ ಹತ್ತು ದಿನದ ಅಂತರದಲ್ಲಿ  ಬೊಕ್ಕೆ ತುರಿಕೆ ಆದರೂ ಅದನ್ನು ತುರಿಸುವಂತಿಲ್ಲ.. ಉಗುರು ತಾಕಿದರೆ ಕಲೆ ಉಳಿಯುವ ಎಚ್ಚರಿಕೆ.. ಒಮ್ಮೆ ಜೋರು ಹಸಿವಾದಂತಾಗಿ ತಿನ್ನಲು ಹೊರಟರೆ ಎಲ್ಲವೂ ಸಪ್ಪೆ.    

ಒಮ್ಮೆಯೂ ಬರದೆ ಇದ್ದ ಕಾರಣಕ್ಕೋ ಎನೋ ನನ್ನ ಗಂಡನ ನಂತರ ನನಗೆ ತಗುಲಿತು ರೋಗ. ಗಂಡ ಪಟ್ಟ ಯಾತನೆ ನೋಡಿ ಮರುಗಿದ್ದ ನಾನು ನನಗೆ ಬಂದದ್ದನ್ನು ಹೇಗೆ ಎದುರಿಸುವುದು ಎಂದು ಯೋಚಿಸುತ್ತ ಹತ್ತು ದಿನ ಕಳೆಯುತ್ತ ಬಂದಿತು . ಮನಸ್ಸಿಗೇನೊ  ನೆಮ್ಮದಿ.. ಆದರೂ ಹತ್ತು ದಿನದಲ್ಲಿ ಬಂದ  ನೋವು , ಪಟ್ಟ  ಯಾತನೆ ಯಾರಿಗೂ ಬರಬಾರದೆಂಬುದು ದೇವರಲ್ಲಿ ಕೋರಿಕೆ.. ಒಮ್ಮೆ ಸಿಡುಬಿಗೆ  ತುತ್ತಾದ ವ್ಯಕ್ತಿ  ಇನ್ನೊಮ್ಮೆ   ತುತ್ತಾಗಲ್ಲವೆಂಬ ನಂಬಿಕೆ.. ಯಾಕಂದರೆ -ಸಿಡುಬು ರೋಗ -ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಹಲಸಿನ  ಚಿಪ್ಸ್ ತಿನ್ನುವ ಆಸೆ ಹಾಗೆಯೇ ಉಳಿಯಿತು.. :( 

(ವಿಷಯ ಸಂಗ್ರಹಣೆ - ಅಂತರ್ಜಾಲ  ಮತ್ತು ಹಿರಿಯರ ಭೋದನೆ )