ಶುಕ್ರವಾರ, ಏಪ್ರಿಲ್ 27, 2012

ಅರ್ಥವಿಲ್ಲದ ಕಲ್ಪನೆ .... ಮುದುಡಿತು..



ಅರಳಿತೊಂದು ಸುಂದರ ಕುಸುಮವು
ಪರಿಮಳವ ಸೂಸುತಿಹುದು 
ಎಲ್ಲೆಡೆಗೆ ಕಂಪ ಬೀರುತಿಹುದು 

ಜನಿಸಿತೊಂದು ಮಗುವು 
ಬೆಳೆಯಿತದುವು ಒಳ್ಳೆಯತನವ 
ಮೈಗೂಡಿಸಿಕೊಂಡು   

ಹಿಸುಕಿ ಹಾಕಿರುವರೆ ನಿನ್ನ  
ದೃಷ್ಟಿ ತಗುಲಿತೆ ನಿನಗೆ 
ಮೋಸ ಮಾಡಿರುವರೇನು
ಪರಿತಪಿಸುತಿರುವೆಯೇಕೆ ಹೀಗೆ
ಕೊಂಚ ನಲುಗಿರುವೆ ಏನು 
 ಬೆದರಿ ನಿಂತಿರುವೆಯೇನು 
ಮುಖ ಬಾಡಿ ನೋವ ತುಂಬಿ 
ಗಬ್ಬು ವಾಸನೆಯಾಯಿತೆ ನಮಗೆ 

ಮಂಗಳವಾರ, ಏಪ್ರಿಲ್ 24, 2012

ಕನಸುಗಳ ನೋವಿನ ಛಾಯೆ





ಮನದಲ್ಲಿ ಬುಗಿದೆದ್ದ ನೋವಿನ ನೆರಳಿಗೆ 
ಮನವದುವು ಮುದುಡಿ ಮಮ್ಮಲು ಮರುಗಿದೆ
ಕಾಣಿಸುತಿಹುದೇ ಬರಿ ಕತ್ತಲು ಕಣ್ಣೆದುರಿಗೆ 
 ಅದ ಭ್ರಮಿಸಿ ಹೃದಯವು ಮೆದುವಾಗಿ ಕಂಪಿಸಿದೆ 

ಬಿಟ್ಟು ಹೋದವೇಕೆ ನಾನಂದು ಕಂಡಿದ್ದ ಕನಸುಗಳು 
ಕಣ್ಣೇರು ಸುರಿಸುತಿದೆ ಮನ  ಕೊರಗಿ ಕೊರಗಿ 
ಸಾಲದಾಯಿತೆ ನನ್ನೆಲ್ಲ ಪ್ರಯತ್ನಗಳು 
ಅಡಗಿ ಕುಂತವೆ ಭಾವನೆಗಳು ಲೋಕಕ್ಕೆ ಹೆದರಿ 

ಕೂಗಿ ಕರೆಯುತಿಹೆನು ಕನಸುಗಳ ಪುನಃ ನನ್ನೆಡೆಗೆ 
ಅರಳಿಸಬೇಕಾಗಿದೆ ದುಗುಡ ತುಂಬಿದ ಮನವ
ಮತ್ತದೇ ಕನಸುಗಳು ಗಾಳಿಯಲಿ ತೇಲುತಿರೆ
ಬಿಡಲಾರೆ ನಿಮ್ಮನ್ನು ಜೀವನಕೆ ಅರ್ಥವನು ಕೊಡುವವರ




ಸೋಮವಾರ, ಏಪ್ರಿಲ್ 23, 2012

ಕನಸಿನೊಳು ಕನಸಾಗಿ ....


ನೂರಾರು ಆಲೋಚನೆಗಳು 
ಲವಲವಿಕೆಯ ಬಂಧಗಳು 
ಓಡೋಡಿ ಬರುತಲಿವೆ ನನ್ನಲ್ಲಿಗೆ
ಕಾಣದ ಮುಖಗಳು 
ಕೇಳಿಸದ ಮಾತುಗಳು 
ಕಚಗುಳಿಯ ಇಡುತಿವೆ ಮೆಲ್ಲಗೆ 

ಬಂಧನಗಳ ತೆಕ್ಕೆಯಲಿ 
ಮಾತುಗಳ ಅಕ್ಕರೆಯಲಿ 
ಬೀಳುವೇನು ಎಂದೋ 
ಎದೆಯಲ್ಲಿ ಸಣ್ಣ ಕಂಪನವು 
ಕಣ್ಣಲ್ಲಿ ಹೊಸತನವು 
ಗಬಕ್ಕನೆ ಹಿಡಿದಿಡುವುದೇ 

ರಾತ್ರಿಯ ಕನಸುಗಳು 
ತನ್ನಲ್ಲಿ ಅಳುತಿರಲು 
ಮೂಡಿ ಬರಲಿಹುದೇ ಹೊಸ ಪುಳಕಗಳು 
ಮಲಗುತಿವೆ ಕಣ್ಣ ರೆಪ್ಪೆಗಳು 
ತುಟಿಯಲ್ಲಿ ತುಸುನಗುವು 
ಜಾರಿ ಬಿದ್ದಿತೆ ಮುತ್ತ ಹನಿಗಳು 

ಸಿಹಿಯಾದ ಕನಸುಗಳು ಬೀಳುತಿರಲು 
ನೋವೆಲ್ಲ ಮಾಗಿರಲು 
ಅಡಗಿದ  ಪರದೆಯು ಸರಿಯುತಿರಲು 
ಪಾತ್ರಧಾರಿಗಳು ನಾವೆಲ್ಲಾ 
ಆಡಲೇ ಬೇಕು ಜೀವನದ ಹಗಲೆಲ್ಲ 
ಕನಸುಗಳು ಬಂದೊಮ್ಮೆ 
ಹೊಸ ಲೋಕಕ್ಕೆ  ಎಳೆದೊಯ್ಯುತಿರಲು  

ಭಾನುವಾರ, ಏಪ್ರಿಲ್ 22, 2012

ಕನ್ನಡ - ಕಸ್ತೂರಿ








ಬೆಲೆ ಬಲ್ಲಿರೆನೂ ಕನ್ನಡ ಭಾಷೆಯ 
ಕಂಪ  ಹರಡಬಲ್ಲದು  ಬಲು ದೂರ 
ಪರವಶವಾಗುವೆವು ಭಾವೈಕ್ಯವಾಗುವೆವು 
ತಲ್ಲೀನವಾಗುವೆವು ಇದರ ಸುಂದರ ಉಯಿಲಿಗೆ 
ಮೃಷ್ಟಾನ್ನ  ಭೋಜನವು ಸಂತೃಪ್ತ ಭಾವನೆಯು 
ಕನ್ನಡ ಕವನಗಳ ಓದುಗರಿಗೆ  

ಮಾತೃಭಾಷೆಯು  ನಮ್ಮ ಸೊತ್ತು
ಅನ್ಯ ಭಾಷೆಯು ನಮದಲ್ಲದ ಸ್ವತ್ತು 
ಕೊಂಡುಕೊಳ್ಳಿರಿ  ಅನ್ಯರ ಸಂಪತ್ತು 
ಆದರೆ  ಮಾರುಹೋಗದಿರಿ ತಂದೀತು ಆಪತ್ತು 

ಶುಕ್ರವಾರ, ಏಪ್ರಿಲ್ 20, 2012

ತಾಳ್ಮೆ




ಬದುಕು ಕಲಿಸುವುದು
ವಿಧ ವಿಧ ಪಾಠವ
ಊಹೆಗೂ ಮೀರಿರುವುದು
ಅದರ ಪ್ರಭಾವ

ತಾಳಿದವನು ಬಾಳಿಯಾನು
ಅದ ತಿಳಿದವನೇ ಜಗ ಆಳಿಯಾನು
ಹಿಡಿತದಲ್ಲಿದ್ದರೆ ಸಿಟ್ಟು ಸಂಯಮ
ಸಿಗುವುದು ಜೀವನಕ್ಕೆ ಆಯಾಮ

ಇಟ್ಟ  ಹೆಜ್ಜೆಯ ನೆನಪಿಸದೆ
ಹಿಂತಿರುಗಿ ನೋಡದೆ
ಮುಂದೆ ಕಾಣುವ ಹೊಂಡದಲಿ ಕಾಲಿಡದೆ
ಸಾಧನೆಗೆ ಅಡಿಯಿಡುವುದೇ

ಒಂದು ಮಳೆಯ ಸ್ಪರ್ಶ




ಮಳೆಯ ಸ್ಪರ್ಶಕೆ
ಇಳೆಗಾಯಿತು ನಾಚಿಕೆ
ತನ್ನೆಲ್ಲ  ಕೊಳೆಯ ಹರಿವ
ನೀರಿನೋಟ್ಟಿಗೆ ಹರಿ ಬಿಟ್ಟು
ತ್ರಷೆಯು ಇಂಗಿಸಿ
ಹೊಸ ವಸ್ತ್ರವ ತೊಟ್ಟು
ಸುಂದರವಾಗಿ ಮೈ ತಳೆದು
ಸಂಪನ್ನವಾದಂತೆ ಭಾಸವಾಯಿತು

ಮಂಗಳವಾರ, ಏಪ್ರಿಲ್ 17, 2012

:)

ಸುತ್ತಲೂ ಪಸರಿಸಿದೆ ಕಣ್ಣಿನ ಕೆಳಗೆಲ್ಲ ಕಪ್ಪು
ಹೆಪ್ಪುಗಟ್ಟಿ ನಿಂತಿದೆ ಮನದಾಳದ ನೋವು
ಕಣ್ಣ ಹನಿಗಳೆಲ್ಲ ಬತ್ತು ಬೇಸಿಗೆಯ ಬರದ ಛಾಯೆ
ಬೇಗೆಯನು ಸಹಿಸಲಸಾಧ್ಯವು ಹರಿಸಿ ಬಿಡೊಮ್ಮೆ
ಕಣ್ಣಲ್ಲಿ ಸಂತಸದ ಹನಿಗಳ ಮಳೆ

ಅಗೋಚರ ಹಂಬಲ


ಕಣ್ಣೆವೆ ಮುಚ್ಚಿದರು ಕರಗಲಾರದು
ನಿನ್ನಯ ನೆನಪು
ನೆನೆದು ನೆನೆದು ಮನ ಹಸಿಯಾಯಿತು
ಎಂದನಿಸಿತು ಬರಬಾರದೇ ಮರೆವು

ಕತ್ತಲಲಿ ಬೆಳಕನರಸಿ ಹೊರಟಿರುವೆ
ದೂರದಲಿ ತೋರುತಿಹುದೇ ಸಣ್ಣ ದೀಪವು
ಗೋಚರಿಸಲು ಅದರ ಪ್ರಖರವು
ದೂರವಾಯಿತು ಮನದ ಅಳಲು

ಶುಕ್ರವಾರ, ಏಪ್ರಿಲ್ 13, 2012

ತಪ್ಪು ನನ್ನದು

ಹೀಗೇಕೆ ನೀನು ನಂಗೆ ಹತ್ತಿರ
ಕಳೆದುಕೊಳ್ಳಲು ನನಗಿಲ್ಲ ಆತುರ
ಮೂಳೆಯಿಲ್ಲದ ನಾಲಿಗೆ ಆಡಿದ ಮಾತುಗಳಿಗೆ
ಕೊಡುವುದಿಲ್ಲವೇ ಕ್ಷಮೆ
ಅಸ್ತು ಅಂದು ತಲೆ ಅಲ್ಲಾಡಿಸಿದ ಮರುಘಳಿಗೆ
ಏರಿ ಕೂರುವೆ ಸಮಧಾನ ಎಂಬ ಮಳಿಗೆ

ಬುಧವಾರ, ಏಪ್ರಿಲ್ 11, 2012

ದಡ ಸೇರಿವೆ ಹಡಗುಗಳು
ಸುನಾಮಿಯ ಭೀತಿಯಲಿ
ಹಡಗಿನ ಮಿನುಗುವ ಸಾಲು ದೀಪಗಳು
ಕಣ್ಣಿಗೆ ತಂಪನ್ನೀಯಿವೆ
(ಮನೆಯ ಉಪ್ಪರಿಗೆಯಿಂದ ನೋಡಿದ ದೃಶ್ಯದಿಂದ ಉಧ್ಭವ ವಾಗಿದ್ದು - ಸುನಾಮಿಯ ಎಚ್ಚರಿಕೆಯ ಘಂಟೆ )

ನಾನು-ನನ್ನ ಭಾವಗಳು



**********************
ಹೀಗೇಕೆ ಹಿಗ್ಗು ಮುಗ್ಗಾಗಿ
ಎಳೆಯುತ್ತಿರುವೆ ನನ್ನ
ಒಮ್ಮೊಮ್ಮೆ ನನ್ನನ್ನು
ಜಗ್ಗಿ ಬಿಡುವೆ ಬೀಳುವ ಮುನ್ನ

ಬಂದೆನ್ನ ಅಪ್ಪಿ ಬಿಡುವೆ
ಹೇಳದೆಯೇ ಕೇಳದೆಯೇ
ಕಣ್ಣಲ್ಲಿ ನೀರ ತುಂಬುವೆ
ಮೊಗದಲ್ಲಿ ನಗೆಯ ಜೊತೆಯೇ

ಬಾ ಎಂದಾಗ ಬರದೆ
ನನ್ನ ನೀ ಕಾಡುವೆ
ಕರೆಯದೆ ಬಂದು
ನನ್ನ ಜೊತೆ ನೀ ಆಡುವೆ

ನಿನ್ನ ಅಲೆಯ ಸುಳಿಗೆ ಸಿಕ್ಕ
ಹಾಳು ಬಿದ್ದ ಮರದ ಚೂರು
ನಿನ್ನ ಜೊತೆಯೇ ಎಳೆದೊಯ್ಯುವೆ
ನಿನ್ನ ಜೊತೆಯೇ ಸಾಗುವೆ

ನನ್ನ ಭಾವ ನನ್ನ ಜೊತೆ
ಮರೆತು ಬಿಡುವೆ ನನ್ನನೆ
ಬೇಡಿಕೊಂಬೆ ಬರದಿರಲಿ ವ್ಯಥೆ
ಇದುವೇ ನನ್ನ ಜೀವನದ ಗಾಥೆ

ಸೋಮವಾರ, ಏಪ್ರಿಲ್ 9, 2012

!!!!


ಬರೆಯಬೇಕೆಂಬ ಇಚ್ಛೆ
ಮನದಲ್ಲೇನು ಇಲ್ಲ ಚರ್ಚೆ
ನಿರ್ಲಿಪ್ತತೆಯಿಂದ ಕೂಡಿದೆ ಮನಸು
ಕಟ್ಟಬೇಕಾಗಿದೆ ಇನ್ನೊಮ್ಮೆ ಕನಸು